ಚುನಾವಣೆ ಹತ್ತಿರ ಬರುತ್ತಿದ್ದಂತೆ ಶಕುನಿಯಾಟಗಳು
ಶುರುವಾಗಿವೆ. ಹೇಗಾದ್ರೂ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಲೇಬೇಕು ಅಂತ ಬಿಜೆಪಿ
ಮಾಸ್ಟರ್ ಪ್ಲಾನ್ಗಳನ್ನು ಮಾಡಿಕೊಂಡಿದೆ. ಅದರ ಇತ್ತ ಬಿಜೆಪಿಗೆ ಟಾಂಗ್ ಕೊಡುವ ನಿಟ್ಟಿನಲ್ಲಿ
ಸಿಎಂ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಚುನಾವಣಾ ಆಖಾಡವೂ ಸಿದ್ಧವಾಗಿದೆ. ರಾಜ್ಯ ಮಟ್ಟದಲ್ಲಿ
ನಡೆಯುತ್ತಿರೋ ಚುನಾವಣಾ ಕಾವು ಒಂದುಕಡೆಯಾದ್ರೆ, ಚಿಕ್ಕಬಳ್ಳಾಪುರದ ಕಥೆಯೇ ಬೇರೆಯಾಗಿದೆ. ಇಲ್ಲಿ ಹಾಲಿ
ಶಾಸಕರಾಗಿರೋ ಡಾ.ಕೆ.ಸುಧಾಕರ್ ಅವರನ್ನು ಮುಗಿಸಲು ದೊಡ್ಡ ತಂಡವೇ ರೆಡಿಯಾಗಿದೆ ಎಂಬ ಸುದ್ದಿ ಇದೀಗ
ಕೇಳಿ ಬರುತ್ತಿದೆ.
ಡಾ.ಸುಧಾಕರ್ ಕಥೆ ಮುಗಿಸ್ತಾರಾ ಭೂಗಳ್ಳರು?
ಡಾ.ಕೆ.ಸುಧಾಕರ್ ಚಿಕ್ಕಬಳ್ಳಾಪುರದ ಶಾಸಕರಾಗಿದ್ದು, ಈ
ಹಿಂದೆ ಡಾ.ಕೆ.ಸುಧಾಕರ್ ಅವರ ಜೊತೆಗಿದ್ದವರೇ ಇದೀಗ ಡಾ.ಸುಧಾಕರ್ ಅವರ ಕಥೆ ಮುಗಿಸಲು ಪ್ಲಾನ್
ಮಾಡಿದ್ದಾರೆ. ರಾಜಕೀಯವಾಗಿ ಡಾ.ಸುಧಾಕರ್ ಅವ್ರು ಬೆಳೆಯಬಾರದು ಅಂತ ನಿರ್ಧರಿಸಿರೋ ಕೆಲವರು, ಹಾಲಿ
ಶಾಸಕರನ್ನು ರಾಜಕೀಯವಾಗಿ ಮುಗಿಸುವ ಯತ್ನ ಮಾಡ್ತಿದ್ದಾರೆ. ಅಂದ್ಹಾಗೆ ಇಂಥಾ ಪ್ರಯತ್ನವನ್ನ
ಮಾಡ್ತಿರೋದಾದ್ರೂ ಯಾರು ಗೊತ್ತಾ? ಚಿಕ್ಕಬಳ್ಳಾಪುರದಲ್ಲಿನ ಕೆಲವು ಭೂಗಳ್ಳರು ಎಂಬ ಶಂಕೆ ಇದೆ.
ಡಾ.ಕೆ.ಸುಧಾಕರ್ ಅವರೇ ಟಾರ್ಗೆಟ್ ಯಾಕೆ?
ಸರ್ಕಾರಿ ಜಮೀನನ್ನು ಯಾರ್ ಯಾರು ಕಬಳಿಸಿದ್ದಾರೆ ಎಂಬ
ಮಾಹಿತಿಯನ್ನ ಸೀಕ್ರೆಟಾಗಿ ಕಲೆ ಹಾಕ್ತಾ ಇದೆ ದಕ್ಷ ಅಧಿಕಾರಿಗಳ ತಂಡ. ಈಗಾಗಲೇ ಒಂದಷ್ಟು ಭೂಗಳ್ಳರ
ಮಾಹಿತಿಯನ್ನು ಕಲೆ ಹಾಕಲಾಗಿದ್ದು, ಅವರ ವಿರುದ್ಧ ಘರ್ಜನೆ ಮಾಡೋದಕ್ಕೆ ದಕ್ಷ ಅಧಿಕಾರಿಗಳು
ರೆಡಿಯಾಗಿದ್ರು ಅಂತ ಹೇಳಲಾಗುತ್ತಿದೆ. ಇದರಿಂದ ಕುಪಿತಗೊಂಡ ಕೆಲವರು ಡಾ.ಕೆ.ಸುಧಾಕರ್ ಮತ್ತೊಮ್ಮೆ
ಗೆದ್ದರೆ ಭೂಗಳ್ಳತನಕ್ಕೆ ಬ್ರೇಕ್ ಬೀಳುತ್ತೆ ಅಂತ ತಿಳಿದು, ಡಾ.ಕೆ.ಸುಧಾಕರ್ ಅವರನ್ನು
ರಾಜಕೀಯವಾಗಿ ಮುಗಿಸಬೇಕು ಅಂತ ಪ್ಲಾನ್ ಮಾಡ್ಕೊಂಡಿದೆ.
ಈಗಾಗಲೇ ಚಿಕ್ಕಬಳ್ಳಾಪುರದಲ್ಲಿ ಒಂದು ಸೀಕ್ರೆಟ್ ಟೀಮ್ ಕೂಡ
ಕಟ್ಟಿದ್ದು, ರಹಸ್ಯ ಸ್ಥಳದಲ್ಲಿ ನಿಗೂಢವಾಗಿ ಕಾರ್ಯ ನಿರ್ವಹಿಸ್ತಿದೆ. ಈಸಲ ಹೇಗಾದ್ರೂ ಮಾಡಿ
ಡಾ.ಕೆ.ಸುಧಾಕರ್ ಅವರನ್ನು ರಾಜಕೀಯವಾಗಿ ಸೋಲಿಸಿದ್ರೆ, ಮುಂದಿನ ದಿನಗಳಲ್ಲಿ ಯಾವ ಜಮೀನನ್ನು
ಬೇಕಾದ್ರೂ ಕಬಳಿಸಬಹುದು ಅನ್ನೋದು ಕೆಲವರ ಲೆಕ್ಕಾಚಾರ.
ಜನ ಏನಂತಾರೆ?
2013ಕ್ಕೂ ಮೊದಲು ಜೆಡಿಎಸ್. ಕೆಪಿ ಬಚ್ಚೇಗೌಡ ಇಲ್ಲಿ ಶಾಸಕರಾಗಿದ್ರು.
ಆದ್ರೆ ಚಿಕ್ಕಬಳ್ಳಾಪುರ ಜಿಲ್ಲಾಕೇಂದ್ರ ಅಂತ ಕರೆಯಲಾಗ್ತಿತ್ತೇ ವಿನಹ, ಜಿಲ್ಲಾಕೇಂದ್ರಕ್ಕೆ
ಬೇಕಾದ ಮೂಲ ಸೌಕರ್ಯಗಳನ್ನ ಒದಗಿಸಲೇ ಇಲ್ಲ. ಆದ್ರೆ ಡಾ.ಕೆ.ಸುಧಕರ್ ಆಸ್ಪತ್ರೆಯನ್ನು ಹೈಟೆಕ್ ಮಾಡಿದ್ರು.
ಡಯಾಲಿಸಿಸ್ ಕೇಂದ್ರವನ್ನ ಮಾಡಿದ್ರು. ಬಸ್ ನಿಲ್ದಾಣಗಳನ್ನ ನಿರ್ಮಿಸಿದ್ರು. ಒಂದು ಮಾದರಿ ಜಿಲ್ಲೆ
ಅಂದ್ರೆ ಹೇಗಿರಬೇಕೋ, ಆ ಎಲ್ಲಾ ಸೌಕರ್ಯಗಳನ್ನು ಜಿಲ್ಲೆಗೆ ತಂದ್ರು.. ಸುಧಾಕರ್ ಅವರ ಈ
ಕಾರ್ಯಗಳೇ, ಈಸಲದ ಚುನಾವಣೆಯಲ್ಲೂ ಗೆಲುವನ್ನು ತಂದುಕೊಡಲಿದೆ ಅನ್ನೋದು ಹಲವರ ಅಭಿಪ್ರಾಯ.
No comments:
Post a Comment