ಪ್ರದೀಪ್ ಹತ್ರ ನಿಜವಾಗ್ಲೂ ದಾಖಲೆಗಳನ್ನು ಇದಾವಾ? ಇಲ್ಲಿದೆ ಭಯಾನಕ ರಹಸ್ಯ! - India Today Kannada

Papermag-smooth

Expect the News First..Take Another Look..

Home Top Ad

Responsive Ads Here

Post Top Ad

Tuesday, 13 March 2018

demo-image

ಪ್ರದೀಪ್ ಹತ್ರ ನಿಜವಾಗ್ಲೂ ದಾಖಲೆಗಳನ್ನು ಇದಾವಾ? ಇಲ್ಲಿದೆ ಭಯಾನಕ ರಹಸ್ಯ!

Responsive Ads Here

pradeep
`ಚಿಕ್ಕಬಳ್ಳಾಪುರದ ಶಾಸಕರಾದ ಡಾ.ಕೆ. ಸುಧಾಕರ್ ಅವರಿಗೆ ನನ್ನದೊಂದು ಪ್ರಶ್ನೆ' ಹೀಗಂತ ಡೈಲಾಗ್ ಹೇಳ್ಕೊಂಡು ಚಿಕ್ಕಬಳ್ಳಾಪುರದ ರಾಜಕೀಯ ಚದುರಂಗದಲ್ಲಿ ಮಿಂಚಿನ ಸಂಚಲನ ಮೂಡಿಸ್ತಿದ್ದಾನೆ ಓಬ್ಬ ಯುವಕ. ಆತನ ಮಾತನ್ನ ಕೇಳಿ ಒಂದಷ್ಟು ಜನ  ಗೊಂದಲಕ್ಕೆ ಈಡಾದದ್ದು ಇದೆ. ನನ್ನ ಹತ್ರ ದಾಖಲೆಗಳಿವೆ. ಡಾ.ಕೆ.ಸುಧಾಕರ್ ಅವ್ರು ರಾಜೀನಾಮೆ ನೀಡಬೇಕು ಅಂತ ಡಾ.ಕೆ.ಸುಧಾಕರ್ ಅವ್ರ ವಿರುದ್ಧ ಹಲವು ಆರೋಪಗಳನ್ನು ಮಾಡ್ತಿದ್ದಾನೆ. ಆದರೆ ಈತ ಫೇಸ್ಬುಕ್ನಲ್ಲಿ ಮಾಡ್ತಿರೋ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ ಅನ್ನೋದು ಭಯಾನಕ ರಹಸ್ಯ ಬಯಲಾಗಿದೆ.

ಪ್ರದೀಪ್ ಬಳಿ ಯಾವ ದಾಖಲೆಗಳೂ ಇಲ್ಲ!
ಸಾಮಾಜಿಕ ಜಾಲ ತಾಣಗಳಲ್ಲಿ ಆರೋಪಗಳನ್ನ ಮಾಡ್ತಿರೋ ಪ್ರದೀಪ್ ಬಳಿ ಆರೋಪಗಳನ್ನು ಸಾಬೀತು ಪಡಿಸುವಂಥಾ ಯಾವುದೇ ದಾಖಲೆಗಳು ಇಲ್ಲ ಅನ್ನೋದು ಇದೀಗ ಬಯಲಾಗಿದೆ. ಒಂದಷ್ಟು ಫೇಕ್ ಡಾಕ್ಯುಮೆಂಟ್ ಗಳನ್ನು ಕ್ರಿಯೇಟ್ ಮಾಡಿ, ಸುಳ್ಳುಗಳನ್ನು ಪಟ್ಟಿ ಮಾಡಿ, ಸಾಮಾಜಿಕ ಜಾಲ ತಾಣಗಳಲ್ಲಿ ಹರಿಯಬಿಡಲಾಗುತ್ತಿದೆ ಅನ್ನೋ ರಹಸ್ಯ ಬಯಲಾಗಿದೆ. ತನ್ನ ಬಳಿ ಇರೋ ದಾಖಲೆಗಳನ್ನು ನ್ಯಾಯಾಲಯದಲ್ಲಿಟ್ರೂ, ಅದು ವಜಾ ಆಗೋ ಸಾಧ್ಯತೆಗಳು ದಟ್ಟವಾಗಿವೆ. ಇದೇ ಕಾರಣಕ್ಕೆ, ದಾಖಲೆಗಳನ್ನು ನ್ಯಾಯಾಲಯದ ಮುಂದಿಟ್ಟು ಕೇಸ್ ಹಾಕೋ ಬದಲು ಸೋಶಿಯಲ್ ಮೀಡಿಯಾದಲ್ಲಿ ಹರಿಯ ಬಿಡಲಾಗುತ್ತಿದೆ.

ಕೋರ್ಟಿನಲ್ಲಿ ಕೇಸ್ ಹಾಕಿದ್ರೆ ಜೈಲಿಗೆ ಹೋಗೋದು ಪ್ರದೀಪನೇನಾ?

ಇದು ಹಂಡ್ರೆಡ್ ಪರ್ಸೆಂಟ್ ನಿಜ.. ಯಾಕಂದ್ರೆ ಪ್ರದೀಪ್ ಒಬ್ಬ ಸ್ವಯಂ ಘೋಷಿತ ಪ್ರಾಧ್ಯಾಪಕ. (ಫೇಕ್ ಎಜುಕೇಷನ್, ಫೇಕ್ ಸರ್ಟಿಫಿಕೇಟ್) ತನಿಗೆ ತಾನೇ ಪ್ರಾಧ್ಯಾಪಕ ಅಂತ ಹೇಳಿಕೊಳ್ಳೋ ಪ್ರದೀಪ್, ತನ್ನ ಬಳಿ ಇರೋ ದಾಖಲೆಗಳನ್ನು ತನಿಖಾ ಸಂಸ್ಥೆಗಳ ಮುಂದಿಟ್ಟು ಆರೋಪಗಳನ್ನು ಸಾಬೀತು ಮಾಡಬಹುದಿತ್ತು. ಆದ್ರೆ ಕೋರ್ಟಲ್ಲಿ ಈತನದ್ದು ಸುಳ್ಳು ಕೇಸು ಅಂತ ಗೊತ್ತಾದ್ರೆ, ಪ್ರದೀಪ್ ವಿರುದ್ಧವೇ ನ್ಯಾಯಾಲಯ ಕ್ರಮ ಕೈಗೊಳ್ಳೋ ಸಾಧ್ಯತೆ ನಿಚ್ಚಳವಾಗಿದೆ. ಇದೇ ಕಾರಣಕ್ಕೆ, ಕೋರ್ಟಿಗೆ ಹೋದ್ರೆ ನನ್ನ ಬುಡಕ್ಕೇ ಬರುತ್ತೆ ಅನ್ನೋದನ್ನ ಅರಿತ ಸ್ವಯಂ ಘೋಷಿತ ಪ್ರಾಧ್ಯಾಪಕ, ಸೋಶಿಯಲ್ ಮೀಡಿಯಾ ಮುಂದೆ ಬಂದಿದ್ದಾನೆ.

ಪ್ರದೀಪ್ ಬಗ್ಗೆ ಜನ ಏನಂತಾರೆ?
ಈ ಪ್ರದೀಪ್  ಇತಿಹಾಸ ತುಂಬಾನೇ ಕರಾಳವಾಗಿದೆ. ಈತ ಸ್ವಯಂ ಘೋಷಿತ ಪ್ರಾಧ್ಯಾಪಕ ಆಗಿದ್ರೂ, ಯಾವ ಕಾಲೇಜಿನಲ್ಲೂ ಭದ್ರವಾಗಿ ಕೆಲಸ ಮಾಡಲಿಲ್ಲ. ಯಾಕಂದ್ರೆ, ಈತನ ವಕ್ರ ಬುದ್ದಿಯನ್ನು ನೋಡಿದೋರೆಲ್ಲಾ ಈತನಿಗೆ ಗೇಟ್ ಪಾಸ್ ಕೊಟ್ಟಿದ್ದಾರೆ. ಎಲ್ಲೂ ಕೆಲಸ ಸಿಗದೇ ಕೊನೆಗೆ ಡಾ.ಕೆ.ಸುಧಾಕರ್ ಅವರ ಬಳಿ ಹೋಗಿ ಹಣಕ್ಕಾಗಿ ಡಿಮ್ಯಾಂಡ್ ಇಟ್ಟಿದ್ದಾನೆ. ಆದ್ರೆ ಈತನ ಡಿಮ್ಯಾಂಡ್ ಗೆ ಡಾ.ಕೆ.ಸುಧಾಕರ್ ಬಗ್ಗದೇ ಇದ್ದಾಗ, ನವೀನ್ ಕಿರಣ್ ಜೊತೆ ಸೇರಿಕೊಂಡು, ಸೋಶಿಯಲ್ ಮೀಡಿಯಾಗಳನ್ನು ಬಳಸಿಕೊಂಡು ಅಪ ಪ್ರಚಾರ ಶುರು ಮಾಡಿದ್ದಾನೆ. ದಾಖಲೆಗಳಿದ್ರೆ ಕೋರ್ಟಲ್ಲಿ ಪ್ರೂವ್ ಮಾಡಬಹುದಿತ್ತು. ಆದ್ರೆ ಕೋರ್ಟಿಗೆ ಹೋದ್ರೆ, ಸುಳ್ಳು ಕೇಸ್ ದಾಖಲಿಸಿ ಎಲ್ಲಿ ನ್ಯಾಯಾಧೀಶರು ನನ್ನನ್ನೇ ಜೈಲಿಗೆ ಹಾಕ್ತಾರೋ ಅನ್ನೋ ಭಯ ಪ್ರದೀಪನಿಗಿದೆ. ಇನ್ನು ಪ್ರದೀಪನ ಡಬಲ್ ಗೇಮ್ ಚಿಕ್ಕಬಳ್ಳಾಪುರದ ಜನರಿಗೂ ಗೊತ್ತಿದ್ದು, ಸೋಶಿಯಲ್ ಮೀಡಿಯಾಗಳಲ್ಲೇ ವಾರ್ ಶುರುವಾಗಿದೆ. ಪ್ರದೀಪ್ ಮಾಡಿದ ಆರೋಪಗಳಿಗೆ ಜನರೇ ತಕ್ಕ ತಿರುಗೇಟು ನೀಡ್ತಿದ್ದಾರೆ.

No comments:

Post a Comment

banner-final

Post Bottom Ad

Pages