ಪ್ರದೀಪನಿಗೆ ಹಿಗ್ಗಾಮುಗ್ಗಾ ಉಗಿಯುತ್ತಿರುವ Facebook ಜನ - India Today Kannada

India Today Kannada

Expect the News First..Take Another Look..

Breaking

Home Top Ad

Responsive Ads Here

Post Top Ad

Responsive Ads Here

Thursday 15 March 2018

ಪ್ರದೀಪನಿಗೆ ಹಿಗ್ಗಾಮುಗ್ಗಾ ಉಗಿಯುತ್ತಿರುವ Facebook ಜನ



ಚುನಾವಣೆ ಹತ್ತಿರ ಬರುತ್ತಿದ್ದಂತೆ ಚಿಕ್ಕಬಳ್ಳಾಪುರದ ಜನರ ಮುಂದೆ ಹೀರೋ ಆಗಬೇಕೆಂದುಕೊಂಡು ಪೋಸ್ ಕೊಟ್ಟ ಪ್ರದೀಪನಿಗೆ ಜನರೇ ತರಾಟೆಗೆ ತೆಗೆದುಕೊಂಡಿದ್ದಾರೆ. `ಮಾನ್ಯ ಶಾಸಕರಿಗೆ ನಿಮಗೆ ಒಂದು ಪ್ರಶ್ನೆ' ಅಂತ ಸೋಶಿಯಲ್ ಮೀಡಿಯಾದಲ್ಲಿ ಹೇಳುತ್ತಿದ್ದವನನ್ನ ಅದೇ ಸೋಶಿಯಲ್ ಮೀಡಿಯಾ ಜನರೇ ಹಿಗ್ಗಾಮುಗ್ಗಿ ಉಗೀತಿದ್ದಾರೆ. ನೀನು ಪ್ರಶ್ನೆ ಕೇಳಬೇಕಾದರೆ ಕೋರ್ಟ್ ಮುಂದೆ ಹೋಗಿ ಕೇಳು. ಇಲ್ಲೇನ್ ಬದನೇಕಾಯಿ ಕೀಳ್ತಾ ಇದೀಯಾ? 5 ವರ್ಷಗಳಿಂದ ಸುಮ್ಮನಿದ್ದವನು ಈಗ ಚುನಾವಣೆ ಹತ್ತಿರ ಬಂದಾಗಲೇ ಕೇಳ್ತಿರೋದು ಯಾಕೆ? ನಿನ್ನ ಪ್ರಶ್ನೆ ಸಮಂಜಸವೇ ಆಗಿದ್ದರೆ, ಅದನ್ನು ಎಲ್ಲಿ ಪ್ರಶ್ನಿಸಬೇಕೋ ಅಲ್ಲೇ ಪ್ರಶ್ನಿಸು ಅಂತ ತೀವ್ರವಾಗಿ ತರಾಟೆಗೆ ತೆಗೆದುಕೊಳ್ತಿದ್ದಾರೆ.

VIDEO-1 : ಪ್ರದೀಪ್ ಫೇಸ್ಬುಕ್ ಜನರಿಂದ ಉಗಿಸಿಕೊಳ್ಳುವ ವಿಡಿಯೋ ಇಲ್ಲಿದೆ ನೋಡಿ

VIDEO-2: ಪ್ರದೀಪ್ ಫೇಸ್ಬುಕ್ ಜನರಿಂದ ಉಗಿಸಿಕೊಳ್ಳುವ ವಿಡಿಯೋ ಇಲ್ಲಿದೆ ನೋಡಿ

 ಸೋಶಿಯಲ್ ಮೀಡಿಯಾಗಳಲ್ಲಿ ಬಿಚ್ಚಿಕೊಳ್ಳುತ್ತಿವೆ ಪ್ರದೀಪನ ರಂಗಿನಾಟ
ನವೀನ್ ಕಿರಣ್ ಜೊತೆ ಸೇರಿಕೊಂಡಿರೋ ಪ್ರದೀಪ್ ಅನ್ನೋ ನವರಂಗಿಯ ರಂಗಿನಾಟವನ್ನು ಫೇಸ್ಬುಕ್ ಜನರೇ ಬಿಚ್ಚಿಡುತ್ತಿದ್ದಾರೆ. ಫೇಕ್ ಸರ್ಟಿಫಿಕೇಟ್ ಮೂಲಕ ಕೆಲಸ ಗಿಟ್ಟಿಸಿಕೊಂಡಿದ್ದು, ಕಾಲೇಜುಗಳಲ್ಲಿ ಮಾಡಬಾರದ್ದು ಮಾಡಿದ್ದು, ಕಾಲೇಜು ಹೆಣ್ಣುಮಕ್ಕಳ ಮೇಲೆ ಕಣ್ಣು ಹಾಕುತ್ತಿದ್ದದ್ದು, ಮ್ಯಾನೇಜ್ ಮೆಂಟ್ ನಿಂದ ಹೀನಾಯವಾಗಿ ಬೈಸಿಕೊಂಡಿದ್ದು. ಕಾಲೇಜಿನ ಹಣವನ್ನು ದುರುಪಯೋಗಪಡಿಸಿಕೊಂಡಿದ್ದು ಹೀಗೇ ಪ್ರದೀಪನ ಒಂದೊಂದೇ ರಂಗಿನಾಟಗಳನ್ನು ಫೇಸ್ ಬುಕ್ ಜನರೇ ಬಿಚ್ಚಿಡುತ್ತಿದ್ದಾರೆ.

 VIDEO-3: ಪ್ರದೀಪ್ ಫೇಸ್ಬುಕ್ ಜನರಿಂದ ಉಗಿಸಿಕೊಳ್ಳುವ ವಿಡಿಯೋ ಇಲ್ಲಿದೆ ನೋಡಿ

ಡಾ.ಸುಧಾಕರ್ ಗೆ ಹಣದ ಮೋಹ ಇದ್ದಿದ್ರೆ, ಸ್ವಂತ ದುಡ್ಡನ್ನು ದಾನ ಮಾಡ್ತಿರಲಿಲ್ಲ
ಡಾ.ಸುಧಾಕರ್ ಅಕ್ರಮ ಆಸ್ತಿ ಸಂಪಾದಿಸಿದ್ದಾರೆ ಅನ್ನೋರಿಗೆ ಜನರೇ ತಿರುಗೇಟು ಕೊಟ್ಟಿದ್ದಾರೆ. ಡಾ.ಸುಧಾಕರ್ ಅವರಿಗೆ ಹಣದ ಮೋಹ ಇದ್ದಿದ್ರೆ, ಸ್ವಂತ ದುಡ್ಡಲ್ಲಿ, ವಿದ್ಯಾರ್ಥಿಗಳಿಗೆ ಉಚಿತವಾಗಿ ಬಸ್ ಪಾಸ್ ನೀಡ್ತಾ ಇರಲಿಲ್ಲ. ತಮ್ಮ ಚಾರಿಟೆಬಲ್ ಟ್ರಸ್ಟ್ ಮೂಲಕ, ಶುದ್ಧ ಕುಡಿಯೋ ನೀರಿನ ಘಟಕಗಳನ್ನ ಹಾಕಿಸ್ತಾ ಇರಲಿಲ್ಲ. ಮಾರ್ಕೆಟ್ ಏರಿಯಾದಲ್ಲಿ ಬೀದಿ ವ್ಯಾಪಾರಿಗಳ ಸುಂಕವನ್ನು ರದ್ದು ಮಾಡ್ತಿರಲಿಲ್ಲ. ದೇಹಿ ಅಂತ ಬೇಡಿ ಬಂದವರ ಬದುಕನ್ನ ಹಸನಾಗಿಸುತ್ತಿರಲಿಲ್ಲ. ಡಾ.ಸುಧಾಕರ್ ಅವರಿಗೆ ಹಣಕ್ಕಿಂದ ಜನರ ಮೇಲಿನ ಪ್ರೀತಿ ದೊಡ್ಡದು. ಅದಕ್ಕಾಗಿಯೇ ಇಷ್ಟೆಲ್ಲಾ ಕಾರ್ಯಗಳನ್ನ ಮಾಡ್ತಾ ಇದ್ದಾರೆ. ಅವರ ಬಳಿ ಹಣವಿದೆ. ಅದನ್ನು ಬಡವರು, ದೀನ ದಲಿತರು, ಅಸಹಾಯಕರಿಗೆ ನೀಡ್ತಾ ಇದ್ದಾರೆ. ಅಕ್ರಮ ಆಸ್ತಿ ಸಂಪಾದಿಸೋರೇ ಆಗಿದ್ದಿದ್ರೆ, ಇಷ್ಟೆಲ್ಲಾ ದಾನ ಮಾಡ್ತಾ ಇದ್ರಾ ಅಂತ, ಯಡಬಿಡಂಗಿ ಪ್ರದೀಪನಿಗೇ ತರಾಟೆಗೆ ತೆಗೆದುಕೊಂಡಿದ್ದಾರೆ.


No comments:

Post a Comment


Post Bottom Ad

Responsive Ads Here

Pages